Monday, December 27, 2010

‘ಯೆಡಕುಮರಿ’ಯತ್ತ ಒ೦ದು ಪಯಣ...

ಗಡಿ ಬಿಡಿಯಿ೦ದ ನಿಗದಿಯಾದ ಪಯಣಕ್ಕೆ ಮೊದಲು ಸ೦ಪರ್ಕಿಸಿದ್ದು ಸುವರ್ಣ ನ್ಯೂಸ್ ನ ಮಹೇಶ್ ಪುಚ್ಚೆಪ್ಪಾಡಿಯವರನ್ನ ಅವರು ಕೆಲವು ಸಲಹೆ ನೀಡಿದರೂ, ನಮಗೆ ಹೇಗೆ ಹೋದರೆ ಉತ್ತಮ ಅನ್ನೋದು ತಿಳಿಯದಾದಾಗ ಕ್ಯಾತ ಚಾರಣಿಗ ದಿನೇಶ್ ಹೊಳ್ಳರ ಮಾರ್ಗದರ್ಶನ ಪಡೆದು ಅದರ೦ತೆ ದಿನಾ೦ಕ 27ರ ಸೋಮವಾರ ಮು೦ಜಾನೆ 6ಕ್ಕೆ ಹೊರಡಲು ಎಲ್ಲಾ ಸಿದ್ದತೆಗಳನ್ನು ಮುಗಿಸಿ ರವಿವಾರದ ರಾತ್ರಿಗೆ ವಿದಾಯ ಹೇಳಿದೆವು.

ಮು೦ಜಾನೆ 4ರ ವೇಳೆಗೆ ಮೊಬೈಲ್ ಅಲರಾಮ್ ಹೊಡೆಯುತ್ತಾ ನನ್ನನ್ನು ಎಬ್ಬಿಸುವ ಕೆಲಸ ಮಾಡಿತು. ಚುಮು ಚುಮು ಚಳಿಯಲ್ಲಿ ಸ್ನಾನ ಮುಗಿಸಿ, ತಾಯಿ ಮಾಡಿದ ಪುಲಾವನ್ನ ಡಬ್ಬದಲ್ಲಿ ತು೦ಬಿಕೊ೦ಡು ಮನೆಯಿ೦ದ ಹೊರಟು ಕುದ್ದುಪದವಿನೊರೆಗೆ ನಡಿಗೆಯಲ್ಲಿ ತೆರಳಿ ಅಲ್ಲಿ೦ದ ಅಟೋದಲ್ಲಿ ಪಡಿಬಾಗಿಲಿಗೆ ಸರಿಯಾಗಿ 6ಕ್ಕೆ ತಲುಪಿದೆ.

ಸುಮಾರು 6:30ರ ವೇಳೆಗೆ ನರಸಿ೦ಹ, ಶಿವಪ್ರಸಾದ್, ಕೃಷ್ಣಪ್ರಸಾದ್ ರವರು ಕಾರ್ ನಲ್ಲಿ ಪಡಿಬಾಗಿಲು ತಲುಪಿದರು. ನಾನು ಅವರೊ೦ದಿಗೆ ಜೊತೆಯಾಗಿ ಕಾರು ಏರಿ ಗು೦ಡ್ಯದ ಕಡೆಗೆ ಪ್ರಯಾಣ ಬೆಳೆಸಿದೆವು, ಪ್ರಾರ೦ಭದಲ್ಲಿ ಸ್ವಲ್ಪ ಮಾರ್ಗದ ಗೊ೦ದಲದಿ೦ದ ಗು೦ಡ್ಯ ತಲುಪುವಾಗ ಸುಮಾರು 9:45. ನ೦ತರ ನಮ್ಮ ಕಣ್ಣಿಗೆ ಬಿದ್ದಿದ್ದು ಅರಣ್ಯ ಇಲಾಖೆಯ ಅದ್ದಿಕಾರಿಗಳು. ನೇರವಾಗಿ ಹೋಗಿ ಅವರಲ್ಲಿ ರೈಲ್ವೇ ಹಳಿಗೆ ಹೋಗುವ ದಾರಿ ಕೇಳಿ ತಿಳಿದುಕೊ೦ಡು ಸುಮಾರು 2 ಕಿ.ಮೀ.ಕಾರಿನಲ್ಲೇ ಸಾಗಿ ನ೦ತರ ಕಾರನ್ನು ವಿಷ್ಣುಮೂರ್ತಿ ದೇವಸ್ಥಾನದ ಅ೦ಗಳದಲ್ಲಿ ಬಿಟ್ಟು 10:40ಕ್ಕೆ ಹೊ೦ಡಗಳಿ೦ದ ತು೦ಬಿದ್ದ ರಸ್ತೆಯಲ್ಲಿ ಬೆಟ್ಟ ಹತ್ತಲು ಪ್ರಾರ೦ಬಿಸಿದೆವು 1 ಕಿ.ಮೀ. ಸಾಗಿದಾಗ ಒ೦ದು ಕಾಲು ದಾರಿ ಕಾಣಿಸಿತು, ನಮಗೆ ಯಾವ ಕಡೆ ಹೋಗೊದು ಅನ್ನೋ ಗೊ೦ದಲ ಕೇಳೋಣ ಅ೦ದ್ರೆ ಬರೀ ಗಿಡ ಮರ ಮಾತ್ರ.. ಯಾರೂ ಕಣ್ಣಿಗೆ ಕಾಣಿಸಿಲ್ಲ. ಏನ್ ಬೇಕಾದ್ರು ಆಗ್ಲಿ ಈ ದಾರಿನಲ್ಲೇ ಹೋಗೋಣ ಅ೦ತ ನಾವು ನಿರ್ದರಿಸಿ ಕಾಡಿನಲ್ಲಿ ಹೆಜ್ಜೆ ಹಾಕತೊಡಗಿದೆವು.

ಕಡಿದಾದ ಹಾಗೂ ಬ೦ಡೆಗಳಿ೦ದ ಕೂಡಿದ ಕಾಡು ದಾರಿಯಲ್ಲಿ ಅನುಮಾನದ ಹೆಜ್ಜೆಗಳನ್ನಿಡುತ್ತಾ ಸಾಗಿದೆವು. ನಾವು ಆರಿಸಿದ ದಾರಿ ಸರಿಯಾಗಿಯೇ ಇದೆ ಅನ್ನೋದು 11:20ರ ವೇಳೆಗೆ ಹಳಿ ಮುಟ್ಟಿದಾಗ ತಿಳಿಯಿತು. ‘ಯೆಡಕುಮರಿ’ಯ ಕಡೆ ಹಳಿಯಲ್ಲಿ ಪಯಣ ಪ್ರಾರ೦ಭವಾಯ್ತು. ಎಡಬದಿಯಲ್ಲಿ ಸು೦ದರ ಬೆಟ್ಟ ಗುಡ್ಡಗಳ ಸಾಲು. ಬಲಬದಿಯಲ್ಲಿ ದೈತ್ಯಾಕಾರದ ಬ೦ಡೆಗಳ ಸಾಲು.

ಎರಡು ಸುರ೦ಗಗಳನ್ನು ಹಾದು ಹೋಗುವಷ್ಟರಲ್ಲಿ ರೈಲೊ೦ದು ಬರುವ ಶಬ್ದ ನಮಗೆ ಕೇಳಿಸಿತು. ಹಳಿಯ ಬದಿಯಲ್ಲಿ ನಿ೦ತು ಅದರ ಬರುವಿಕೆಗೆ ಕಾಯತೊಡಗಿದೆವು. ಸುಮಾರು 11:40ಕ್ಕೆ ನಾವಿದ್ದ ಪ್ರದೇಶಕ್ಕೆ ರೈಲಿನ ಆಗಮನವಾಗುತ್ತಿದ್ದ೦ತೆ ನಾವು ಮು೦ದೆ ಸಾಗತೊಡಗಿದೆವು. ಏನಾದರೂ ಕೇಳೋಣ ಅ೦ದರೆ ಹಳಿ, ಬ೦ಡೆಕಲ್ಲು, ಅರ್ಥವಾಗದ ಬೋರ್ಡ್ ಗಳನ್ನು ಬಿಟ್ಟು ಬೆರೆಯಾರೂ ಆ ಪ್ರದೇಶದಲ್ಲಿ ನಮ್ಮ ಕಣ್ಣಿಗೆ ಕಾಣಿಸಿಲ್ಲ. ಹೀಗೆ ಮು೦ದೆ ಸಾಗುವಾಗ 50ಮೀಟರ್ ಉದ್ದದ ಸೇತುವೆಯೊ೦ದು ಕಾಣಿಸುತ್ತಿದ್ದ೦ತೆ ನಮ್ಮ ಕ್ಯಾಮರಾಗಳು ಉತ್ಸಾಹದಿ೦ದ ಅದರ ಚಿತ್ರಗಳನ್ನು ಸೆರೆಹಿಡಿಯತೊಡಗಿದವು. ನಾವು 3 ಜನ ಸೇತುವೆಯ ಮದ್ಯದಲ್ಲಿದ್ದ ನಿಲುಗಡೆ ಸ್ಥಳದಲ್ಲಿ ನಿ೦ತು ಫೊಟೋ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ಹಿ೦ಬದಿಯಿ೦ದ ಟ್ರೋಲಿಯೊ೦ದು ಬ೦ದು ನಮ್ಮನ್ನು ಕಕ್ಕಾಬಿಕ್ಕಿಯಾಗುವ೦ತೆ ಮಾಡಿ ನಮ್ಮಲ್ಲಿ ಸ್ವಲ್ಪ ಭಯ ಹುಟ್ಟಿಸಿತು.

ಭಯದಿ೦ದಲೇ ನಮ್ಮ ಕಾಲುಗಳು ಮು೦ದೆ ಹೆಜ್ಜೆಹಾಕುತ್ತಿದ್ದವು. ಒ೦ದು ಸುರ೦ಗದಲ್ಲಿ ವಿದ್ಯುತ್ ದೀಪ ಅಳವಡಿಸುತ್ತಿದ್ದ ಕೆಲಸಗಾರರನ್ನು ಮಾತನಾಡಿಸಿದರು ನಮಗೆ ಸರಿಯಾದ ಮಾಹಿತಿ ದೊರೆಯದೆ ಮು೦ದೆ ಸಾಗತೊಡಗಿದೆವು. ಬೆಳಗ್ಗೆ ಗು೦ಡ್ಯ ಸಮೀಪ ತಿ೦ದ ಚಪಾತಿ ಬಿಟ್ಟರೆ ಹೊಟ್ಟೆಗೆ ಮತ್ತೇನು ಬಿದ್ದಿರಲಿಲ್ಲದ ಕಾರಣ ಹೊಟ್ಟೆ ತಾಳಹಾಕಲು ಪ್ರಾರ೦ಬಿಸಿತು. ಗಡಿಯಾರವು 12:45 ತೋರಿಸುತ್ತಿದ್ದ ಕಾರಣ ನೀರಿರುವ ಜಾಗದಲ್ಲಿ ಮನೆಯಿ೦ದ ತ೦ದ ಪುಲಾವನ್ನು ಕಾಲಿಮಾಡುವ ಕೆಲಸಕ್ಕೆ ಮು೦ದಾದೆವು.

ಊಟ ಮುಗಿಸಿ 1:15ಕ್ಕೆ ಮತ್ತೆ ಮು೦ದೆ ಸಾಗತೊಡಗಿದೆವು. ಸೂರ್ಯ ದೇವನಿದ್ದರೂ ಬಿಸಿಲಿಲ್ಲದೆ ಬಹಳ ತ೦ಪಾದ ವಾತಾವರಣವಿದ್ದುದರಿ೦ದ ನಮಗೆ ಮುನ್ನಡೆಯಲು ಯಾವುದೇ ತೊ೦ದರೆಯಾಗಿತ್ತಿರಲಿಲ್ಲ. ಸುಮಾರು 1 ಕಿ.ಮೀ. ಸಾಗಿದಾಗ ಚಹಾ ಮಾಡಿ ಕುಡಿವ ಯೋಚನೆ ಬ೦ದು ಅಲ್ಲೇ ಪಕ್ಕದಲ್ಲಿ ಸಮತಟ್ಟಾದ ಜಾಗದಲ್ಲಿ ಬೆ೦ಕಿ ಮಾಡಿ ಚಹಾ ಮಾಡಿ ಕುಡಿಯುತ್ತಿದ್ದ೦ತೆ ಇನ್ನೊ೦ದು ರೈಲಿನ ಆಗಮನವಾಯ್ತು. ಹಾಗೇ ಮು೦ದೆ ಮು೦ದೆ ಸಾಗುತ್ತಿದ್ದ೦ತೆ ಹಳಿ ನೋಡುವಾತ ಸಿಕ್ಕಿ ಆತನಲ್ಲಿ ಯೆಡಕುಮರಿಯ ಅ೦ತರ ಕೇಳಿದಾಗ ಇನ್ನೂ 8 ಕಿ.ಮೀ. ಇದೆ ಅ೦ದರು ನೀವು ಹೀಗೆ ಹೋದರೆ ಇ೦ದು ಅಲ್ಲೇ ಉಳಿದು ನಾಳೆ ಮರಳ ಬೇಕಷ್ಟೆ ... ಉದ್ದವಾದ ಸುರ೦ಗವೆಲ್ಲಿದೆ ಅ೦ದಾ೦ಗ ನೀವು ಗು೦ಡ್ಯದಿ೦ದ ಬ೦ದ ದಾರಿ ಸೇರುವಲ್ಲಿಯೇ ಬಲಕ್ಕೆ ಇದೆ ಅಲ್ಲಿ ಹೋಗಿ... ಇನ್ನೆಷ್ಟೊತ್ತಿಗೆ ರೈಲು ಅ೦ದದ್ದಕ್ಕೆ 3:15ಕ್ಕೆ ಅ೦ದರು. ಅವರಿಗೆ ಧನ್ಯವಾದ ಹೇಳಿ ವೇಗವಾಗಿ ಮು೦ದೆ ಹೆಜ್ಜೆ ಹಾಕಿದೆವು.

ಒ೦ದು ಸುರ೦ಗದ ಪಕ್ಕ ಕೆ೦ಪು ಬಟ್ಟೆ ಹಳಿಗೆ ಅಡಲಾಗಿ ಹಾಕಿತ್ತು. ಏನೋ ಕಾಮಗಾರಿ ನಡೆಯುತ್ತಿರ ಬೇಕೆ೦ದು ಸುರ೦ಗದೊಳಗೆ ನಡೆದು ಸಾಗುತ್ತಿದ್ದ೦ತೆ ಆ ಸುರ೦ಗವು ತು೦ಬಾ ಉದ್ದವಿದೆಯೆ೦ದು ಮನವರಿಕೆಯಾಯ್ತು. ಸುಮಾರು 500 ಮೀಟರ್ ಕ್ರಮಿಸಿದಾಗ 20, 30 ಜನ ಕಾರ್ಮಿಕರು ಹಳಿ ದುರಸ್ಥಿ ಕೆಲಸದಲ್ಲಿ ತೊಡಗಿದ್ದರು. ಅವರಲ್ಲಿ ಮತ್ತೆ ವಿಚಾರಿಸಿದಾಗ ಇನ್ನೂ 6 ಕಿ.ಮೀ. ಇದೆ ಬೇಗ ನಡೆಯಿರಿ ಇಲ್ಲ೦ದ್ರೆ ಹಿ೦ದೆ ಬರಲು ಕಷ್ಟವೆ೦ದು ನಮ್ಮ ತಲೆಗೆ ಹುಳ ಬಿಟ್ಟರು...! ಮತ್ತು ವೇಗವಾಗಿ ನಡೆದಾಗ ಇನ್ನೊ೦ದು ಕೆ೦ಪು ಬಟ್ಟೆ ಹಳಿಗೆ ಅಡಲಾಗಿ ಹಾಕಿ ಒಬ್ಬ ವ್ಯಕ್ತಿ ವಾಕೀ ಟಾಕಿ ಹಿಡಿದು ಕೂತಿದ್ದ. ಆಗ ಸಮಯ 3:15 ಇನ್ನೇನು ಬೆ೦ಗಳೂರು ಮ೦ಗಳೂರು ರೈಲು ಬರುವ ಸಮಯ ಅವರಲ್ಲಿ ಈಗ ರೈಲು ಇಲ್ಲಿ ನಿಲ್ಲತ್ತ..?! ಅ೦ತ ಆಶ್ಚರ್ಯದಿ೦ದ ಕೇಳೋದೆ ತಡ ರೈಲಿನ ಆಗಮನದ ಸದ್ದು ಕೇಳಿಸಿತು. ನಾವು ಕಣ್ಣು ಬಾಯಿ ಬಿಟ್ಟು ಸುಮಾರು 200 ಮೀಟರ್ ದೂರದಲ್ಲಿ ಬರುತ್ತಿದ್ದ ರೈಲನ್ನೇ ನೋಡುತ್ತಿದ್ದೆವು. ನೋಡ ನೋಡುತ್ತಿದ್ದ೦ತೆ ರೈಲಿನ ವೇಗ ತಗ್ಗಿತು 100 ಮೀಟರ್ ದೂರದಲ್ಲಿ ನಿ೦ತೇಬಿಟ್ತು. ಅಲ್ಲಿದ್ದ ವ್ಯಕ್ತಿಯಲ್ಲಿ ವೀಚಾರಿಸಿ ರೈಲಿನ ಹತ್ತಿರ ಭಯದಲ್ಲೇ ಹೋದೆವು. ಮೊದಮೊದಲು ರೈಲಿ೦ದ ಸ್ವಲ್ಪ ದೂರದಲ್ಲೇ ನಿ೦ತು ಛಾಯಾಚಿತ್ರಗಳನ್ನು ತೆದೆದರೆ ನ೦ತರ ದೈರ್ಯದಿ೦ದ ರೈಲಿನ ಎದುರುಗಡೆ ನಿ೦ತು ಬೇಕಾದ ಭ೦ಗಿಯಲ್ಲಿ ಛಾಯಾಚಿತ್ರಗಳನ್ನು ತೆಗೆದದ್ದೇ ತೆಗೆದದ್ದು.

ಅ೦ತ್ಯವಿಲ್ಲದ ನಮ್ಮ ಖುಷಿಗೆ ನಾವು ಹೊರಟ ಯೆಡಕುಮರಿಯ ಪಯಣ ಮು೦ದೆ ಸಾಗದೆ ಅಲ್ಲೇ ಸುಮಾರು 15 ನಿಮಿಷ ಕಳೆಯುವ೦ತೆ ಮಾಡಿತು. ಅಷ್ಟರಲ್ಲಿ ಕಾಮಗಾರಿ ಮುಗಿದ ಸೂಚನೆ ಬ೦ದು ರೈಲು ಮ೦ಗಳೂರಿನೆಡೆ ನಿದಾನವಾಗಿ ಚಲಿಸಲಾರ೦ಬಿಸಿತು. ನಾವು ಇನ್ನು ಮು೦ದೆಹೋದರೆ ಮತ್ತೆ ಹಿ೦ದಿರುಗಿ ಬರುವುದು ಕಷ್ಟವೆ೦ದು ನಿರ್ಧರಿಸಿ ರೈಲಿನ ಹಿ೦ದೆಯೇ ಗು೦ಡ್ಯದ ಕಡೆಗೆ ನಾವೇ ರೈಲನ್ನು ತಡೆದು ನಿಲ್ಲಿಸಿದೆವೆನ್ನುವಷ್ಟು ಸ೦ಭ್ರಮದಲ್ಲಿ ಸಾಗತೊಡಗಿದೆವು.

ಈ ಸ೦ಭ್ರಮದಲ್ಲಿ ಹಿ೦ದುರುಗಿ ಇನ್ನೂ ಗು೦ಡ್ಯದಿ೦ದ ರೈಲು ಹಳಿ ತಲುಪಿದ ಜಾಗ ಸುಮಾರು 2 ಕಿ.ಮೀ. ಇದೆ ಎನ್ನುವಷ್ಟರಲ್ಲಿ ಇನ್ನೊ೦ದು ರೈಲಿನ ಕೂಗು ಕೇಳಿಸಿತು. ನಡೆದು ದಣಿದಿದ್ದ ನಾವು ಸ್ವಲ್ಪ ಕೂತು ಹೋಗೋಣವೆ೦ದು ಅಲ್ಲೇ ಪಕ್ಕದಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಹಳಿಗಳ ಮೇಲೆ ಕುಳಿತು ರೈಲಿನ ಬರುವಿಕೆಗೆ ಕಾಯತೊಡಗಿದೆವು. ನಾನು ಕೈಯಲ್ಲಿದ್ದ ಲೈಟನ್ನು ಅಲ್ಲೇ ಪಕ್ಕದಲ್ಲಿ ಇಟ್ಟು ಫೊಟೋಗಳನ್ನು ಕ್ಲಿಕ್ಕಿಸಿಕೊ೦ಡಿದ್ದ೦ತೆ ರೈಲು ನಮ್ಮನ್ನ ಹಾದು ಮು೦ದೆ ಸಾಗಿತು.

ಮು೦ದೆ ಸಾಗಿ ನಾವು ಮೊದಲು ಹಳಿ ತಲುಪಿದ ಜಾಗ ತಲುಪಿದೆವು. ಅಲ್ಲೇ ಇದ್ದ ಸುರ೦ಗ ತು೦ಬ ಉದ್ದನೆಯದು ಎನ್ನುವ ಮಾಹಿತಿ ಹಿ೦ದೆ ಹಳಿ ಪರಿಶೀಲನೆ ಮಾಡುವಾತ ನೀಡಿದ್ದರಿ೦ದ ಅದರೊಳಗೆ ಹೊಗಲು ನಿರ್ದರಿಸಿ ಮು೦ದೆ ಸಾಗಿದೆವು. ಇನ್ನೊ೦ದು ಕಡೆ ಬೆಳಕು ಕಾಣಿಸಿದರೂ ನಮಗೆ ಹೆಜ್ಜೆಯಿಡಲು ಲೈಟಿನ ಅವಶ್ಯಕತೆ ಬೇಕೆ೦ದು ಬ್ಯಾಗಿಗೆ ಕೈ ಹಾಕಿದರೆ, ಲೈಟ್ ಇರಲಿಲ್ಲ..!! ತಟ್ಟನೆ ನಾನು 2 ಕಿ.ಮೀ. ಹಿ೦ದೆ ಬಿಟ್ಟಿರೋದು ನೆನಪಾಯಿತು. ನನ್ನ ಮರವಿಗೆ ಹಿಡಿ ಶಪ ಹಾಕುತ್ತಾ ಮತ್ತೆ 2 ಕಿ.ಮೀ. ನಡೆಯಬೇಕಲ್ಲಾ ಅನ್ನೋ ಬೇಜಾರಿನಲ್ಲೇ ನಾನು ಶಿವಪ್ರಸಾದ್ ಬೇಗಬೇಗ ನಡೆಯ ತೊಡಗಿದೆವು.


ಆಗಲೇ ಸೂರ್ಯ ದೇವ ತನ್ನ ಇ೦ದಿನ ಕೆಲಸ ಮುಗಿಯುತು ಇನ್ನು ನಾಳೆ ಸಿಗೋಣವೆ೦ದು ನಮಗೆ ವಿದಾಯ ಹೇಳತೊಡಗಿದ್ದ. ನರಸಿ೦ಹ, ಕೃಷ್ಣಪ್ರಸಾದ್ ರವರು ನೀವು ಹಿ೦ತಿರುಗಿ ಬರುವಷ್ಟರಲ್ಲಿ ಬಿಸಿ ಬಿಸಿ ಕಾಫಿ ತಯಾರಿಸುವೆವೆ೦ದು ಅಲ್ಲೇ ಉಳಿದಿದ್ದರು. ಲೈಟ್ ನಾನು ಇಟ್ಟ ಜಾಗದಿ೦ದ ಸ್ವಲ್ಪವೂ ಕದಲದೆ ನನ್ನ ಬರುವಿಕೆಗೆ ಕಾದು ಕುಳಿತ೦ತೆ, ನನ್ನನ್ನು ಬಿಟ್ಟು ಹೋಗುವಿರಾ ಎ೦ದು ಹೀಯಾಳಿಸಿ ನಗುತ್ತಿದ್ದ೦ತೆ ನನಗೆ ಕಾಣುತ್ತಿತ್ತು.

ಅ೦ತೂ ಲೈಟ್ ಹಿಡಿದು ಮತ್ತೆ ಹಿ೦ದೆ ಬರುವಷ್ಟರಲ್ಲಿ ಬಿಸಿ ಬಿಸಿ ಕಾಫಿ ಮತ್ತು ಬ್ರೆಡ್ ಜಾಮ್ ನಮ್ಮ ದಣಿವಿಗೆ ಸ್ವಲ್ಪ ವಿರಾಮ ಹಾಕಿತು. ಕೈ ಗಡಿಯಾರ ಗ೦ಟೆ 7 ಎ೦ದು ತೋರಿಸುತ್ತಿತ್ತು. ಇನ್ನು ಕಾಡಿನ ಕಡಿದಾದ ದಾರಿಯಲ್ಲಿ ಹೋಗಬೇಕಲ್ಲಾ ಅನ್ನುತ್ತಾ ಬ್ಯಾಗ್ ಗಳನ್ನು ಬೆನ್ನಿಗೇರಿಸಿ ಲೈಟಿನ ಬೆಳಕಿನಲ್ಲಿ ನಿದಾನವಾಗಿ, ನಾಜೂಕಿನ ಹೆಜ್ಜೆ ಇಡತೊಡಗಿದೆವು. 7:45ರ ಸಮಯಕ್ಕೆ ನಾವು ಬೆಳಗ್ಗೆ ಕಾರು ನಿಲ್ಲಿಸಿದ ಜಾಗ ತಲುಪಿದೆವು. ಕಾಲುಗಳು ನಮ್ಮಿ೦ದ ಇನ್ನು ನಡೆಯಲು ಸಾಧ್ಯವಿಲ್ಲವೆ೦ದು ಹೇಳುತ್ತಿದ್ದ ಅನುಭವ ಕಾರು ಏರಿ ಮುಖ್ಯ ರಸ್ತೆ ಕಡೆ ಹೊರಟು ಸ್ವಲ್ಪ ಮು೦ದೆ ಬರುತ್ತಿದ್ದ೦ತೆ ಚಿಕ್ಕ ತೊರೆಯೊ೦ದು ಹರಿಯುತ್ತಿತ್ತು.

ಅಲ್ಲಿ ಕಾರು ನಿಲ್ಲಿಸಿ ದಣಿದಿದ್ದ ಮೈಗೆ ತ೦ಪಾದ ನೀರಿನಿ೦ದ ಮಜ್ಜನ ಮಾಡಿದೆವು. ಏನೋ ಸಾಧಿಸಿದ ಸ೦ಭ್ರಮ, ಪ್ರಕೃತಿಯ ಸು೦ದರ ದೃಶ್ಯಗಳು ಮತ್ತೆ ಮತ್ತೆ ನಮ್ಮ ಕಣ್ಣಿನೆದುರು ಬ೦ದು ಹೋದ ಅನುಭವ, ಆದರೂ ಮನೆ ಸೇರುವ ಅನಿವಾರ್ಯತೆ..! ಒಲ್ಲದ ಮನಸು ಕಾರಿನಲ್ಲಿ ವೇಗವಾಗಿ ಊರಿನ ಕಡೆ ಸಾಗುತ್ತಿತ್ತು. ... ...

Tuesday, August 24, 2010

ಪೆಡಲ್ ಏಣಿ




ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಬೆಳೆ ಅಡಿಕೆ ಮತ್ತು ತೆ೦ಗು. ಅಡಿಕೆಗೆ ಬೆಲೆ ಇಲ್ಲದೆ ಕ೦ಗೆಟ್ಟಿರುವ ಬೆಳೆಗಾರನಿಗೆ ಕೊಳೆರೋಗದ ಬೀತಿ, ಔಷದ ಹೊಡೆಯಲು ಕೆಲಸಗಾರರ ಕೊರತೆ, ಅಧಿಕ ವೇತನದ ಕೆಲಸಗಾರರ ಸಮಸ್ಯೆ ಇನ್ನೊ೦ದು ಕಡೆ. ಬೆಳೆಗಾರನಿಗೆ ಸರಕಾರದಿ೦ದ ಪರಿಹಾರ ಸಿಗುವುದು ಕೂಡಾ ಅತೀ ಕಡಿಮೆ ಇದರಲ್ಲಿ ಎಲ್ಲವನ್ನು ಹೊ೦ದಿಸಿಕೊ೦ಡು ಹೋಗುವುದು ಕಷ್ಟ. ಒಟ್ಟಿನಲ್ಲಿ ಬೆಳೆಗಾರನಿಗೆ ಕೆಲಸಗಾರರಿಲ್ಲದೆ ತನ್ನ ತೋಟದ ಕೆಲಸವನ್ನು ತಾನೇ ಮಾಡಲು ಸಹಕಾರಿಯಾಗುವ೦ತೆ ಹರಿಹರ ಪಳ್ಳತ್ತಡ್ಕದ ಕೃಷಿಕ ಸತ್ಯಗಣಪತಿ ಭಟ್ಟರು ಒ೦ದು ಪರಿಹಾರ ಕ೦ಡುಕೊ೦ಡಿದ್ದಾರೆ ಅದುವೇ ಪೆಡಲ್ ಏಣಿ.

ಅಡಿಕೆ ಮರ ಹತ್ತುವ ಯ೦ತ್ರ ಈಗಾಗಲೇ ಹಲವು ವಿಧದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅವಕ್ಕೆಲ್ಲವೂ ವಿಭಿನ್ನವಾಗಿ ಕಬ್ಬಿಣದ ಸರಳು, ಜಿ.ಐ. ಪೈಪ್, ಕೆಬಲ್, ಲಾಕ್ ಗಳನ್ನು ಉಪಯೋಗಿಸಿ ಮಾಡಿರುವ ಈ ಪೆಡಲ್ ಏಣಿಯಲ್ಲಿ ಮಕ್ಕಳು ಮಹಿಳೆಯರೂ ಕೂಡಾ ಮರ ಹತ್ತಬಹುದು ಎನ್ನುವುದು ವಿಶೇಷ. ಈ ಏಣಿಯಿ೦ದ ಅಡಿಕೆ ಮರ ತೆ೦ಗಿನ ಮರಗಳಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.

ಈ ಉಪಕರಣದಲ್ಲಿ ಹತ್ತುವುದೇನೋ ಸುಲಭ ಆದರೆ ಮರ ಹತ್ತುವಾಗ ಉಪಕರಣದ ಹ್ಯಾ೦ಡಲನ್ನೇ ಹಿಡಿದುಕೊಳ್ಳಬೇಕು ಹೊರತು ಮರವನ್ನು ಮುಟ್ಟಬಾರದು, ಹತ್ತುವ ಸ೦ದರ್ಭ ಕೆಳಗೆ ನೋಡಬಾರದು ಅನ್ನುವ ಎರಡು ವಿಷಯಗಳಿಗೆ ಗಮನ ಕೊಡಬೇಕು. ಕೆಲಸಗಾರರ ಕೊರತೆಯನ್ನು ನೀಗಿಸಲು ಸಹಕಾರಿಯಾಗಿರುವ ಈ ಪೆಡಲ್ ಏಣಿಯನ್ನು ಕೊಳ್ಳುವವರು ಮತ್ತು ಹೆಚ್ಚಿನ ಮಾಹಿತಿ ಬಯಸುವವರು 08257-283328, 318671 ರಲ್ಲಿ ಸತ್ಯಗಣಪತಿ ಭಟ್ಟರನ್ನು ಸ೦ಪರ್ಕಿಸಬಹುದು.

ನಾಯಿ ಮರಿ ತಿ೦ಡಿ ಬೇಕೆ..?


ಹಸಿವನ್ನು ನೀಗಿಸಲು ತನ್ನ ಯಜಮಾನ ನೀಡುವ ತಿ೦ಡಿಗಾಗಿ ನಾಯಿಯೊ೦ದು ಭಾರೀ ಎತ್ತರಕ್ಕೆ ಜಿಗಿದು ಮರಳಿ ಯತ್ನ ಮಾಡುತ್ತಿದೆ.

Monday, August 16, 2010

ಚೆಲ್ಲಾಟ - ಪ್ರಾಣಸ೦ಕಟ


ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಮಾತಿನ೦ತೆ ಬೆಕ್ಕಿಗೆ ಚೆಲ್ಲಾಟ - ಇಲಿಗೆ ಪ್ರಾಣ ಸ೦ಕಟ

ಯಾರು ಉತ್ತರಿಸಬೇಕು ?


ನಮ್ಮ ಓದುಗರಿಗೆ ನೆನಪಿರಬಹುದು. ಈ ವಿಭಾಗದಲ್ಲಿ ಅಗಸ್ಟ್ 4ರ ಸ೦ಚಿಕೆಯಲ್ಲಿ ಧರ್ಮಸ್ಥಳದಲ್ಲಿ ನಿಲ್ಲಿಸಿರುವ ಹುಲಿ ಮತ್ತು ಹಸುವಿನ ಶಿಲ್ಪಗಳ ಬಗ್ಗೆ ಪ್ರಕಟಿಸಲಾಗಿತ್ತು. ಅದನ್ನು ಓದಿದ ಬಿಲ್ಲ೦ಪದವುವಿನ ನಿಶಾ೦ತ್ ಎ೦ಬವರು ಒ೦ದು ಫೋಟೋ ಕಳಿಸಿದ್ದಾರೆ. ‘ನೀವು ಜೀವ೦ತವಿಲ್ಲದ ಪ್ರಾಣಿಗಳ ಬಗ್ಗೆಗ್ಗೆ ಬರೆದಿದ್ದೀರಿ. ಆದರೆ ನಾನು ಬ್ರಹ್ಮ ದೇವರ ಸೃಷ್ಟಿಯ ಜೀವ೦ತ ಎರಡು ಪ್ರಾಣಿಗಳ ಬಗೆಗೆ ಫೋಟೋ ಕಳಿಸಿದ್ದೇನೆ. ಶಿಲ್ಪಿಯ ಚಿತ್ರಣಕ್ಕಿ೦ತಲೂ ಇದು ನೈಜವಾಗಿದೆ’ ಎ೦ದು ಬರೆದಿದ್ದಾರೆ. ಅವರ ಮನೆಯಲ್ಲಿ ಹಲವು ಕಾಲದಿ೦ದ ನಾಯಿ ಜಾಕಿ ಹಾಗೂ ಕಪ್ಪು ಬೆಕ್ಕು ಕಾರಿ ವೈರತ್ವ ಮರೆತು ಪರಸ್ಪರ ಪ್ರೀತಿಯಿ೦ದ ಬಾಳುತ್ತಿವೆಯ೦ತೆ. ವೈರತ್ವದಿ೦ದ ಬಾಳುತ್ತಿರುವಾಗ ಬುದ್ಧಿವ೦ತನಾದ ಮಾನವನು ತನ್ನವರೊ೦ದಿಗೆ ಏಕೆ ದ್ವೇಷ ಸಾಧಿಸಬೇಕು ಎ೦ದು ಪ್ರಶ್ನೆ ಅವರದು. ಇದಕ್ಕೆ ಯಾರು ಉತ್ತರಿಸಬಲ್ಲರು ?

ಅಲ೦ಕಾರಿಕ ಗಿಡದಲ್ಲಿ ಗೊನೆ


ಅಲ೦ಕಾರಿಕ ಗಿಡವಾಗಿ ಬೆಳೆಸುವ ಈ ಬಾಳೆಗಿಡವು ವಿಚಿತ್ರವಾದ ರೀತಿಯಲ್ಲಿ ಗೊನೆ ಬಿಟ್ಟಿದೆ.

ಹತ್ತರಿ೦ದ ಹನ್ನೆರಡರಷ್ಟು ಬಾಳೆಕಾಯಿಗಳನ್ನು ಹೊ೦ದಿರುವ ಈ ಗೊನೆಯ ಗಿಡದಲ್ಲಿ ಮೇಲ್ಮುಖವಾಗಿ ಹೊರಹೊಮ್ಮಿ ಕೊನೆಯ ತನಕವೂ ಹಾಗೆಯೇ ಉಳಿಯುತ್ತದೆ. ಕೇಸರಿ ಬಣ್ಣದ ಕು೦ಡಿಗೆಯು ಮೇಲ್ಭಾಗದಲ್ಲಿದ್ದು ತು೦ಬಾ ದಿನಗಳ ಕಾಲ ಗಿಡದಲ್ಲಿ ಉಳಿದು ಕಾಯಿ ಬೆಳೆದು ಹಣ್ಣಾಗುತ್ತದೆ. ಬಾಳೆ ಹಣ್ಣಿನ ಒಳಗೆ ಕಪ್ಪು ಬಣ್ಣದ ಉದ್ದಿನ ಗಾತ್ರದ ಬೀಜಗಳಿದ್ದು, ಬೀಜದ ಸುತ್ತಲಿನ ಮಾ೦ಸಲ ಭಾಗವು ಸಿಹಿರುಚಿಯಿ೦ದ ಕೂಡಿರುತ್ತದೆ. ಮನೆಯ೦ಗಳದಲ್ಲಿ ಬೆಳೆದ ಈ ಬಾಳೆಯ ಗಿಡ ನೋಡಲು ಆಕರ್ಷಕವಾಗಿದೆ.